ವಿಜಯಪುರ: ಅಣ್ಣನನ್ನು ಬರ್ಬರವಾಗಿ ತಮ್ಮ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದಿದೆ.
ಜಗ್ಗೇಶ್ ವಡ್ಡರ್ ಹತ್ಯೆಯಾಗಿರುವ ದುರ್ದೈವಿ. ಇನ್ನೂ ರಾಹುಲ್ ವಡ್ಡರ್ ಹತ್ಯೆಗೈದಿರುವ ಆರೋಪಿಯಾಗಿದ್ದು, ಇನ್ನು ದಿನಂಪ್ರತಿ ಮದ್ಯ ಕುಡಿಯಲು ಅಣ್ಣ ಜಗ್ಗೇಶ್ ಹಣ ಕೇಳುತ್ತಿದ್ದ.
ಅಣ್ಣನ ಕಾಟಕ್ಕೆ ತಮ್ಮ ರಾಹುಲ್ ರೋಸಿಹೋಗಿದ್ದಾನೆ. ಅದಕ್ಕಾಗಿ ಹರಿತವಾದ ಆಯುಧದಿಂದ ಚುಚ್ಚಿ ಹತ್ಯೆಗೈದಿದ್ದಾನೆ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.