ವಿಜಯಪುರ: ಬಾಲಾಜಿ ಸಕ್ಕರೆ ಕಾರ್ಖಾನೆಯ ಗೋದಾಮಿನ ಮೇಲೆ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ ಬಾಲಾಜಿ ಶುಗರ್ಸ್ನಲ್ಲಿ ನಡೆದಿದೆ. ಮುದ್ದೇಬಿಹಾಳ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಯಾವುದೇ ಪರವಾನಿಗೆ ಪಡೆಯದೆ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿ ಇಡಲಾಗಿರುವ ಟೀಶರ್ಟ್ಗಳು ಹಾಗೂ ವಾಲ್ ಕ್ಲಾಕ್ಗಳು ಪತ್ತೆಯಾಗಿವೆ. ಮಾಜಿ ವಿಧಾನ ಪರಿಷತ್ ಸದಸ್ಯ
ಎಸ್ ಆರ್ ಪಾಟೀಲ್ ಭಾವಚಿತ್ರ ಹೊಂದಿರುವ ಗೋಡೆ ಗಡಿಯಾರಗಳು, ಎಸ್ ಆರ್ ಪಿ ಗುರುತಿರುವ ಟಿ-ಶರ್ಟ್ ಗಳು ಪತ್ತೆಯಾಗಿವೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಶುಗರ್ ಫ್ಯಾಕ್ಟರಿ ಮೇಲೆ ದಾಳಿ
![](https://karnataka1news.com/wp-content/uploads/2023/03/IMG-20230328-WA0006-860x388.jpg)