ವಿಜಯಪುರ: ಮನೆಯ ಸೆಕ್ಯುರಿಟಿ(Security) ಗಾರ್ಡ್ ಕೊಲೆಗೆ(Murder) ಯತ್ನಿಸಿ ಮನೆಯಲ್ಲಿದ ಚಿನ್ನ, ನಗದು ಹಾಗೂ ಬೆಳೆಬಾಳುವ ವಸ್ತುಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಮಹಾವೀರ ಕಾಲೋನಿಯಲ್ಲಿ ನಡೆದಿದೆ. ಗುಲಾಬ್ಮಹಮ್ಮದ್ ಮುಜಾವರ್ ಹಲ್ಲೆಗೊಳಗಾದ ಸೆಕ್ಯುರಿಟಿ ಗಾರ್ಡ್. ಇನ್ನು ಶ್ರೀಕಾಂತ್ ಎಂಬುವರ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಅಲ್ಲದೇ, ಮನೆಯಲ್ಲಿದ ಚಿನ್ನ, ನಗದು ಹಾಗೂ ಬೆಳೆಬಾಳುವ ವಸ್ತುಗಳು ಕಳ್ಳತನ ಆಗಿದ್ದಾವೆ. ಶ್ರೀಕಾಂತ್ ಕುಟುಂಬಸ್ಥರು ಮದುವೆಗೆ ಹೋದಾಗ ಈ ಕೃತ್ಯ ನಡೆದಿದೆ. ಎಪಿಎಂಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/12/IMG_20231215_085155-1024x535.jpg)