ವಿಜಯಪುರ: ಟೇಬಲ್ ಮೇಲೆ ಕುಳಿತುಕೊಂಡು ಟೀ ಕುಡಿಯುವ ಸಲುವಾಗಿ ಓರ್ವನ ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ನಾಗರಾಜ್ ಗಣಿ, ಅಭಿಲಾಷ್ ರಜಪೂತ, ರಮೇಶ ಉಗಾರಕರ್, ಶಿವಪುತ್ರ ನಾವ್ಹಿ ಬಂಧಿತ ಆರೋಪಿಗಳು.
ಇನ್ನೂ ಗಣಪತಿಸಿಂಗ್ ರಜಪೂತನ್ನು ಹತ್ಯೆಗೈದು ಪರಾರಿಯಾಗಿದ್ದರು. ಅಲ್ಲದೇ, ಮನಗೂಳಿ ಬೈಪಾಸ್ ಬಳಿ ಟೀ ಟೇಬಲ್ ಗಾಗಿ ಗಣಪತಿಸಿಂಗ್ ಊರ್ಫ್ ಸೋನುನ್ನು ಹತ್ಯೆಗೈದು ಎಸ್ಕೇಪ್ ಆಗಿದ್ದರು. ಇನ್ನೂ ಹತ್ಯೆಯಲ್ಲಿ ಭಾಗಿಯಾಗಿರುವ ಸುಧಾಕರ ರಜಪೂತ, ಲಕ್ಷ್ಮಣ ಬಿರಾದಾರ ಪರಾರಿಯಾಗಿದ್ದಾರೆ. ಅಲ್ಲದೇ, ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದವರಿಗೆ ಎಸ್ಪಿ ನಗದು ಘೋಷಣೆ ಮಾಡಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.