ಹಾವೇರಿ: ಕೌಟುಂಬಿಕ ಕಲಹ ಹಿನ್ನಲೆ ಮೂವರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಗೀತಾ ಮರಿಗೌಡ್ರು (32),ಅಕುಲ್ (10),ಅಂಕಿತಾ (7) ಕೊಲೆಯಾದ ದುರ್ದೈವಿಗಳು. ಕುಮಾರಗೌಡ್ ಮರಿಗೌಡ್ರು (35) ಕೊಲೆ ಮಾಡಿದ್ದಾನೆ. ಮೂರು ಮರ್ಡರ್ ಮಾಡಿ ಮೈದುನ ಪರಾರಿಯಾಗಿದ್ದಾನೆ. ಇನ್ನು ಅಣ್ಣನ ಹೆಂಡತಿ ಹಾಗೂ ಇಬ್ಬರು ಮಕ್ಕಳ ಕೊಚ್ಚಿ ಕೊಲೆಗೈದಿದ್ದಾನೆ. ಸ್ವಂತ ಅಣ್ಣ ಹೊನ್ನೆಗೌಡ ಎಂಬುವವನ ಹೆಂಡತಿ ಮತ್ತು ಮಕ್ಕಳ ಹತ್ಯೆಗೈದ ಪಾಪಿ ತಮ್ಮ. ಅಲ್ಲದೇ, ದುಬೈನಲ್ಲಿ ಮೃತ ಗೀತಾ ಗಂಡ ಹೊನ್ನೆಗೌಡ ಕೆಲಸ ಮಾಡುತ್ತಿದ್ದಾನೆ. ಇದಕ್ಕೆ ಕುಟುಂಬದ ಜಗಳವೇ ಕೊಲೆಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ. ಹಾನಗಲ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.