ವಿಜಯಪುರ: ಭೀಮಾತೀರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿರಾದಾರ ಹತ್ಯೆ ಕೇಸ್ನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಮಾತನಾಡಿದ ಅವರು, ಭೀಮನಗೌಡ ಬಿರಾದಾರ್ ಹತ್ಯೆಗೈದಿರುವ ರಜಿವುಲ್ಲಾ ಮಕಾಂದಾರ, ವಸೀಮ ಮುನಿಯಾರ್, ಫಿರೋಜ್ ಶೇಖ್, ಮೌಲಾಲಿ ಲಾಡ್ಲೆಸಾಬ್ ಬಂಧನ ಮಾಡಲಾಗಿದೆ ಎಂದರು. ಇನ್ನು ಹಣಕಾಸಿನ ವ್ಯವಹಾರ, ಹಳೆ ವೈಷಮ್ಯ ಸೇರಿದಂತೆ ಎಲ್ಲ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ. ಅಲ್ಲದೇ, ಕಂಟ್ರಿ ಪಿಸ್ತೂಲ್ ಎಲ್ಲಿಂದ ಖರೀದಿ ಮಾಡಲಾಗಿದೆ ಎನ್ನುವುದನ್ನು ತನಿಖೆ ಮಾಡಿ, ಮುಂದಿನ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದರು.