ವಿಜಯಪುರ: ಹಂದಿ ವ್ಯವಹಾರದ ಆಸ್ತಿಗಾಗಿ ಓರ್ವಳನ್ನು ಬರ್ಬರವಾಗಿ ಹತ್ಯೆಗೈದಿದ್ದ ನಾಲ್ವರು ವಿರುದ್ಧ ಕೇಸ್ ದಾಖಲಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಚಿಕ್ಕ ಸಿಂದಗಿ ರಸ್ತೆಯಲ್ಲಿ ಗಂಗವ್ವ ಗೊಲ್ಲರ್ ಊರ್ಫ್ ಯಂಕಂಚಿನ್ನು ನಾಲ್ವರು ಕಣ್ಣಿಗೆ ಖಾರದ ಪುಡಿ ಎರಚಿ ಹತ್ಯೆಗೈದಿದ್ದರು. ಇನ್ನೂ ಆನಂದ ಗೊಲ್ಲರ, ಕಿರಣ ಗೊಲ್ಲರ, ಸುನೀಲ ಗೊಲ್ಲರ, ಲಕ್ಷ್ಮಿಬಾಯಿ ಗೊಲ್ಲರ ವಿರುದ್ಧ ಕಲಂ 109, 341, 302 ಕೇಸ್ ದಾಖಲಾಗಿದೆ. ಅಲ್ಲದೇ, ಹಂದಿ ವ್ಯವಹಾರದ ಆಸ್ತಿಗಾಗಿ ಹಿನ್ನೆಲೆ ಗಂಗವ್ವಗೆ ಖಾರದ ಪುಡಿ ಎರಚಿ ಭೀಕರವಾಗಿ ಹತ್ಯೆಗೈದಿದ್ದರು. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.