ವಿಜಯಪುರ: ಆ ಠಾಣೆಯ ಪಿಎಸ್ಐ ತನ್ನ ಜೀವವನ್ನು ಲೆಕ್ಕಿಸದೆ ಸೀನಿಮಯ ರೀತಿಯಲ್ಲಿ ಆರೋಪಿಗಳ ಕಾರು ಬೆನ್ನು ಹತ್ತಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬಿಜಾಪುರ ಸಿಂಗಂ ಎನ್ನಿಸಿಕೊಂಡಿದ್ದಾರೆ. ಹೌದು..! ಆದರ್ಶನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಲಕ್ಷಾಂತರ ಮೌಲ್ಯದ ಸಿಗರೇಟ್, ವಾಹನಗಳ್ಳರನ್ನು ಬಂಧನ ಮಾಡುವ ಹಿಂದೇ ಬಿಜಾಪುರ ಸಿಂಗಂ ಹಾಗೂ ಪಿಎಸ್ಐ ಐ.ಎಂ. ದುಂಡಸಿ ಕಾರ್ಯಕ್ಕೆ ಎಲ್ಲೆಡೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಆರೋಪಿಗಳ ಬಂಧನಕ್ಕೆ ಬೆನ್ನು ಹತ್ತಿದಾಗ ಆರೋಪಿಗಳು ಕದ್ದಿರುವ ಕಾರಿನಲ್ಲಿ ಎಸ್ಕೇಪ್ಗೆ ಯತ್ನಿಸಿದ್ದಾರೆ. ಅಲ್ಲದೇ, ಪೊಲೀಸರ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದರು. ಆದ್ರೇ, ಬಿಜಾಪುರ ಸಿಂಗಂನ್ನ ಚಾಣಾಕ್ಷತನದಿಂದ ಆರೋಪಿ ಬಂಧನ ಆಗಿದೆ. ಈ ಬಗ್ಗೆ ವಿಜಯಪುರದಲ್ಲಿ ಎಸ್ಪಿ ಎಚ್ಡಿ ಆನಂದಕುಮಾರ ಮಾತನಾಡಿ, ಅಂತರ್ ರಾಜ್ಯ ಸಿಗರೇಟ್ ಹಾಗೂ ವಾಹನ ಕಳ್ಳರನ್ನು ಬಂಧಿಸಲಾಗಿದೆ ಎಂದರು. ಮಹಮ್ಮದ್ರೇಹಾನ್ ಶೇಖ್, ರಾಮ ಚೌಧರಿ, ತೇಜಸ್ ಉನೇಚ್, ಚೇತನ ಜಾಟ, ದೀಪಾ ಜಾಟ್ ಬಂಧಿತರು. ಅಲ್ಲದೇ, ಬಂಧಿತರಿಂದ ಎರಡು ಕಾರು, ಒಂದು ಗೂಡ್ಸ್ ವಾಹನ, ವಿವಿಧ ಕಂಪನಿಯ ಸಿಗರೇಟ್ ಸೇರಿದಂತೆ 61,49,514 ಮೌಲ್ಯದ ವಸ್ತುಗಳನ್ನು ಜಪ್ತಿಗೈದಿದ್ದಾರೆ. ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
![](https://karnataka1news.com/wp-content/uploads/2023/08/IMG-20230809-WA0091-1024x580.jpg)