ವಿಜಯಪುರ: ಮನೆಯ ಎದುರು ನಿಲ್ಲಿಸಿದ ಬೈಕ್ಗಳು, ಆಟೋಗಳಿಗೆ ಕಿಡಿಗೇಡಿಗಳು ಹಾನಿಗೈದಿರುವ ಘಟನೆ ವಿಜಯಪುರದ ಖಾಜಾನಗರದಲ್ಲಿ ನಡೆದಿದೆ. ಏಳು ಬೈಕ್ಗಳಿಗೆ ಕಲ್ಲು ಎಸೆದು ಹಾನಿ ಮಾಡಿದ್ದಾರೆ. ಅಲ್ಲದೇ, 3ಕ್ಕಿಂತ ಹೆಚ್ಚು ಆಟೋಗಳ ಸೀಟ್ ಹರಿದು ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅದಕ್ಕಾಗಿ ಈ ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖಾಜಾನಗರ ನಿವಾಸಿಗಳು ಆಗ್ರಹಿಸಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/07/IMG_20230714_125714-1024x576.jpg)