ವಿಜಯಪುರ: ನಾವು ಅಲ್ಪಸಂಖ್ಯಾತರ ವಿರೋಧಿ ಅಲ್ಲ ಎಂದು ವಿಜಯಪುರ ನಗರದಲ್ಲಿ ಮಂಗಳವಾರ ಸಂಸದ ರಮೇಶ ಜಿಗಜಿಣಗಿ ಹೇಳಿದರು. ನಮ್ಮ ದೇಶಕ್ಕೆ ಅನಾಹುತ ಮಾಡುವವರ ಮೇಲೆ ಬಾಂಬ್ ಹಾಕಸ್ತೇವಿ. ದೇಶ ದ್ರೋಹಿಗಳ ತಲೆಯ ಮೇಲೆ ಬಾಂಬ್ ಹಾಕಸ್ತೇವಿ ಎಂದು ಕಿಡಿಕಾರಿದರು. ಅಲ್ಲದೇ,
ಅಲ್ಪಸಂಖ್ಯಾತರು ದೇಶ ದ್ರೋಹಿಗಳಲ್ಲ. ಪಾಪ ಅವರು ಏನು ಮಾಡಿಲ್ಲ ಎಂದರು. ಅಲ್ಲದೇ, ಮುಸ್ಲಿಂರಿಗೆ ಮತ ಹಾಕಬೇಡಿ ಎಂದಿದ್ದ ಶಾಸಕ ಯತ್ನಾಳ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನು ಶಾಸಕ ಯತ್ನಾಳಗೆ ಕೇಳಿ. ಇಲ್ಲಿಯೇ ಅದಾನ್ ಅವನಿಗೆ ಕೇಳಿ ಎಂದರು.
ಬಾಂಬ್ ಹಾಕಸ್ತೇವಿ.. ಎಂಪಿ ಜಿಗಜಿಣಗಿ
![](https://karnataka1news.com/wp-content/uploads/2023/03/mp-Jigajingi-860x860.jpg)