K1N ಡೆಸ್ಕ್: ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬಂದಿದೆ. ಮುಂದಿನ ವಾರ ಸಂಪುಟ ವಿಸ್ತರಣೆ ಫಿಕ್ಸ್ ಆಗಿದೆ. ಸಚಿವ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಗರಿಗೆದರಿದೆ.
ರಮೇಶ್ ಜಾರಕಿಹೊಳಿ, ಈಶ್ವರಪ್ಪ ಸೇರಿ ಹಲವು ನಾಯಕರಲ್ಲಿ ಮತ್ತೆ ನಿರೀಕ್ಷೆಯಿದೆ. ಇನ್ನೇನು ಸಂಪುಟ ವಿಸ್ತರಣೆ ನಡೆಯಲ್ಲ ಎಂದು ಕೊಂಡಿದ್ದರು. ಆದ್ರೇ, ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಸ್ತು ಎಂದಿದೆ. ಸಿಎಂ ಬೊಮ್ಮಾಯಿ ಕೊನೆಗೆ ಹೈಕಮಾಂಡ್ ಜೊತೆ ಮಾತನಾಡಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆದಿದ್ಧಾರೆ. ಸೆಪ್ಟೆಂಬರ್ 28ರಂದು ಬಹುತೇಕ ಸಂಪುಟ ವಿಸ್ತರಣೆಯಾಗಲಿದೆ.