ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ಕೂಡಗಿ ಎನ್ಟಿಪಿಸಿ ಘಟಕದಲ್ಲಿ ಕಾರ್ಮಿಕನ ಸಾವು ಪ್ರಕರಣ ಹಿನ್ನೆಲೆ ಮೂವರು ವಿರುದ್ಧ ಕೇಸ್ ದಾಖಲಾಗಿದೆ. ಸೈಟ್ ಇನ್ಚಾರ್ಜ್, ಸೈಟ್ ಸುಪರ್ವೈಜರ್, ಸೈಟ್ ಮ್ಯಾನೇಜರ್ಗಳಾದ ವೆಂಕಟರಾಜು, ಮನಂಜಯ, ಕುಂದನಕುಮಾರ ಸಿಂಗ್ ವಿರುದ್ಧ ಕೇಸ್ ದಾಖಲಾಗಿದೆ. ಇನ್ನು ನಿನ್ನೆ ಘಟಕದಲ್ಲಿ 150 ಅಡಿ ಎತ್ತರದಲ್ಲಿ ಕೆಲಸ ಮಾಡುವಾಗ ಕಾರ್ಮಿಕ ಕಿಶೋರಕುಮಾರಗೆ ವ್ಯವಸ್ಥಿತ ಉಪಕರಣಗಳನ್ನು ನೀಡದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಹವಾಲ್ದಾರ್ ದೂರಿನ ಮೇಲೆ ಕೂಡಗಿ ಎನ್ಟಿಪಿಸಿ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ.