ವಿಜಯಪುರ: ವಿಜಯಪುರ: ಜಾತಿ ಗಣತಿ ನಾಪತ್ತೆ ಆಗಿಲ್ಲ ಎಂದು ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಆಯೋಗ ಯಾವುದೇ ರೀತಿಯ ವರದಿ ಕೊಟ್ಟಿಲ್ಲ. ಕ್ಯಾಬಿನೆಟ್ ಸಮಿತಿಗೆ ಬಂದಾಗ ಚರ್ಚೆ ಆಗುತ್ತದೆ. ಅಲ್ಲಿವರೆಗೆ ವಾದ-ವಿವಾದ, ಚರ್ಚೆಗಳ ಅಗತ್ಯ ಇಲ್ಲ ಎಂದರು. ಅಲ್ಲದೇ, ವಿರೋಧದ ಬಗ್ಗೆ ಈಗ ಮಾತನಾಡಲ್ಲ. ಕ್ಯಾಬಿನೆಟ್ನಲ್ಲಿ ಮಾತನಾಡ್ತೇನೆ. ಆ ಬಗ್ಗೆ ಮಾತನಾಡಿದ್ರೆ ಕ್ಯಾಬಿನೆಟ್ ವೇಳೆ ಏನ್ ಮಾತನಾಡಲಿ. ಇನ್ನೂ ಡಿಸಿಎಂ ಡಿಕೆ ಶಿವಕುಮಾರ್ ವಿರೋಧಿಸಿ ಸಹಿ ವಿಚಾರಕ್ಕೆ ಅದು ಅವರ ವೈಯಕ್ತಿಕ ವಿಚಾರ ಆಗಿದೆ. ನನ್ನ ವಿಚಾರ ಕ್ಯಾಬಿನೆಟ್ ನಲ್ಲಿ ಹೇಳುವೆ. ಇಲಾಖೆ ಅಥವಾ ಆಯೋಗ ಈ ಬಗ್ಗೆ ಕನ್ಪರ್ಮ್ ಮಾಡಿಲ್ಲ. ಹೀಗಾಗಿ ವರದಿ ಸರಿ ಅಲ್ಲ ಎಂದರು.