ವಿಜಯಪುರ: ಅಂಗಡಿಯ ಹಿಂದಿನ ಮೇಲ್ಛಾವಣಿ ಒಡೆದು ಒಳ ನುಗ್ಗಿದ ಕಳ್ಳನೋರ್ವ ಎರಡು ಅಂಗಡಿಯಲ್ಲಿ ಸಾವಿರಾರು ಮೌಲ್ಯದ ವಸ್ತುಗಳ ಹಾಗೂ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಬಸ್ ನಿಲ್ದಾಣ ಬಳಿ ನಡೆದಿದೆ. ಇರ್ಫಾನ್ ಮೊಮಿನ್ ಅಂಗಡಿಯಲ್ಲಿ 5 ಸಾವಿರ ನಗದು ಹಾಗೂ ಜಮೀಲ್ ಹರಿಯಾಳ್ರ ಸಹಾರ ಪಾನ್ಶಾಪ್ನಲ್ಲಿ ಸಾವಿರಾರ ಮೌಲ್ಯದ ಸಿಗರೆಟ್, ಏರ್ ಬರ್ಡ್ ಸೇರಿದಂತೆ ವಿವಿಧ ವಸ್ತುಗಳನ್ನು ಕಳ್ಳ ದೋಚಿ ಪರಾರಿಯಾಗಿದ್ದಾನೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.