ಹುಬ್ಬಳ್ಳಿ: ಕಳೆದ ಒಂದು ದಶಕದಿಂದ ತಲೆ ಮರೆಸಿಕೊಂಡಿದ್ದ ಅಂತರ ಜಿಲ್ಲಾ ದರೋಡೆಕೋರನ್ನು ಛೋಟಾ ಮುಂಬೈ ಪೊಲೀಸರು ಬಂಧಿಸಿದ್ದಾರೆ.
13 ಪ್ರಕರಣದಲ್ಲಿ ಭಾಗಿಯಾಗಿದ್ದ ರಾಜು ಗಂಗಪ್ಪ ಕಾಮಜೇನಿ ಬಂಧಿತ ಆರೋಪಿ. ಇನ್ನು ಹಲವು ಪ್ರಕರಣದಲ್ಲಿ ಆರೋಪಿಯಾಗಿದ ರಾಜು, ಗದಗ, ಧಾರವಾಡ, ಸಂಕೇಶ್ವರ, ಬೆಳಗಾವಿ, ಉತ್ತರ ಕನ್ನಡ, ಶಿರಶಿ ಸೇರಿದಂತೆ ವಿವಿಧ ಕಡೆಗೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಅದಕ್ಕಾಗಿ ಗೋಕುಲ ಪೊಲೀಸರು ಕಾರ್ಯಾಚರಣೆ ನಡೆಸಿ ಚಿಕ್ಕಮಗಳೂರುನಲ್ಲಿ ಮಾರುವೇಷದಲ್ಲಿದ್ದ ರಾಜುನ್ನು ಪೊಲೀಸರು ಲಾಕ್ ಮಾಡಿ, ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ.