ವಿಜಯಪುರ: ನಾಳೆ ಸಿದ್ದೇಶ್ವರ ಶ್ರೀಗಳ ಚಿತಾ ಭಸ್ಮ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ವಿಜಯಪುರ ನಗರದ ಜ್ಞಾನಯೋಗಾಶ್ರಮದಿಂದ ಬೆಳ್ಳಗೆ ಚಿತಾ ಭಸ್ಮ ತೆಗೆದುಕೊಂಡು ಹೋಗಿ ಕೂಡಲ ಸಂಗಮ ಹಾಗೂ ಗೋಕರ್ಣದಲ್ಲಿ ಚಿತಾ ಭಸ್ಮ ವಿಸರ್ಜನೆ ನಡೆಯಲಿದೆ. ವಿಜಯಪುರದಿಂದ 300ಕ್ಕೂ ಅಧಿಕ ವಾಹನಗಳಲ್ಲಿ ಭಕ್ತಾಧಿಗಳು ತೆರಳುವ ಸಾಧ್ಯತೆ ಇದೆ. ಅಲ್ಲದೇ, ಭಕ್ತರೇ ನೇರವಾಗಿ ಕೂಡಲ ಸಂಗಮಕ್ಕೆ ಆಗಮಿಸಬಹುದು. ಆದ್ರೆ, ಆಶ್ರಮದಿಂದ ವಾಹನದ ವ್ಯವಸ್ಥೆ ಇಲ್ಲ ಎಂದು ಆಶ್ರಮದ ಶ್ರೀಗಳು ಪತ್ರಿಕಾ ಪ್ರಕಟಣೆಯಲ್ಲಿ ಶನಿವಾರ ತಿಳಿಸಿದ್ದಾರೆ.