ವಿಜಯಪುರ: ಗಾನಯೋಗಿ ಸಂಘದ ವತಿಯಿಂದ ವಿಜಯಪುರ ನಗರದ ಹೊರವಲಯದಲ್ಲಿರುವ ಭೂತನಾಳೆ ಕೆರೆಯ ದಡದಲ್ಲಿರುವ ಬಿಯರ್ ಬಾಟಲ್, ಸಿಗರೆಟ್ ಪಾಕೆಟ್, ಪ್ಲಾಸ್ಟಿಕ್ ಬಾಟಲ್, ಇನ್ನಿತರ ಪ್ರಕೃತಿಗೆ ಹಾನಿ ಉಂಟು ಮಾಡುವ ತ್ಯಾಜ್ಯವನ್ನು ಜನರು ಎಸಿದಿರುವುದನ್ನು ಕಂಡು ಈ ತ್ಯಾಜವನ್ನು ತೆಗೆದು ಸ್ವಚ್ಚತೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್.ಆರ್.ಕೆ. ಮಾತನಾಡಿ, ಕೆರೆಯ ಹತ್ತಿರಕ್ಕೇ ಸಾಕಷ್ಟು ಜನ ವಿಶ್ರಾಂತಿಗಾಗಿ ಆಗಮಿಸಿದ್ದು, ಅಲ್ಲಿಯ ವಾತಾವರಣ ಕಂಡು ಅಸಹ್ಯ ಬರುವ ಸ್ಥಿತಿಗೆ ತಂದಿರುತ್ತಾರೆ. ಅದಕ್ಕಾಗಿ ಸುತ್ತಮುತ್ತಲಿನ ಪರಿಸರ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದಯಮಾಡಿ ಯಾರೂ ಗಲೀಜ ಮಾಡಬಾರದು ಎಂದರು.
![](https://karnataka1news.com/wp-content/uploads/2023/07/IMG_7435-1024x576.jpg)