ವಿಜಯಪುರ: ಕಾಂಗ್ರೆಸ್ ಸಮಾವೇಶದಲ್ಲಿ ಇಬ್ಬರ ಮೇಲೆ ಕಾಂಗ್ರೆಸ್ ಮುಖಂಡರು ಸೇರಿ ಏಳು ಜನರಿಂದ ಚಾಕುವಿನಿಂದ ಹಲ್ಲೆಗೈದಿರುವ ಘಟನೆ ವಿಜಯಪುರದ ದರ್ಬಾರ್ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಶುಕ್ರವಾರ ನಡೆದಿದೆ. ನಹೀಮ್ ಮೆಹಬೂಬ್ಸಾಬ್ ತಾಂಬೋಲಿ, ನಿಹಾಲ್ ಮೆಹಬೂಬ್ಸಾಬ್ ತಾಂಬೋಲಿ ಹಲ್ಲೆಗೊಳಗಾದವರು.
ಕಾಂಗ್ರೆಸ್ ಮುಖಂಡ ಅಬ್ದುಲ್ ಹಮ್ಮಿದ್ ಮುಶ್ರಿಫ್ ಪುತ್ರ, ಕಾಂಗ್ರೆಸ್ ಮುಖಂಡ ಇರ್ಫಾನ್ ಶೇಖ್ ಸೇರಿದಂತೆ ಏಳು ಜನರು ಸೇರಿ ಇಬ್ಬರ ಮೇಲೆ ಚಾಕು ಹಾಗೂ ರಾಡ್ನಿಂದ ಹಲ್ಲೆಗೈದಿದ್ದಾರೆ ಎಂದು ನಿಹಾಲ್ ಆರೋಪಿಸಿದ್ದಾನೆ. ಗಾಯಾಳುಗಳು ನಗರದ ಖಾಸಗಿ ಅಸ್ಪತ್ರೆಗೆ ದಾಖಲು ಆಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬ್ಯಾನರ್ ಅಳವಡಿಸುವ ವೇಳೆ ಮುಶ್ರಿಫ್ ಪುತ್ರ, ಇರ್ಫಾನ್ ಶೇಖ್ ಹಾಗೂ ಬೆಂಬಲಿಗರಿಂದ ಚಾಕುವಿನಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ. ಗೋಳಗುಮ್ಮಟ್ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.