ವಿಜಯಪುರ: ಅನಧಿಕೃತವಾಗಿ ಕಂಟ್ರಿ ಪಿಸ್ತೂಲ್ ಹಾಗೂ ಜೀವಂತ ಗುಂಡು ಹೊಂದಿದ್ದ ಮೂವರನ್ನು ಬಂಧಿಸಿರುವ ಘಟನೆ ವಿಜಯಪುರದ ಹುಂಡೇಕರ್ ಪೆಟ್ರೋಲ್ ಪಂಪ್ ಬಳಿ ನಡೆದಿದೆ.
ಜಿತೇಶ ನಾಹರ (27), ಗೋವಿಂದ ರಾಠೋಡ (35), ಸತೀಶ್ ನಾಯಕ್ (29) ಬಂಧಿತ ಆರೋಪಿಗಳು. ಇನ್ನು ಸತೀಶ ನಾಯಕ ಎಂಬಾತ ಇಬ್ಬರಿಗೂ ಕಂಟ್ರಿ ಪಿಸ್ತೂಲ್ ಹಾಗೂ 2 ಜೀವಂತ ಗುಂಡು ತಮ್ಮ ಹತ್ತಿರ ಅನಧಿಕೃತವಾಗಿ ಇರಿಸಿಕೊಳ್ಳಲು ಕೊಟ್ಟಿದ್ದನೆಂದು ತಿಳಿದು ಬಂದಿದೆ. ಜಿತೇಶ ಬಳಿ ಸ್ಟೀಲ್ ನಮೂನೆಯ ಕಂಟ್ರಿ ಪಿಸ್ತೂಲ್ ಹಾಗೂ ಗೋವಿಂದನ ಬಳಿ 2 ಜೀವಂತ ಗುಂಡು ಇದ್ದು ವಶಕ್ಕೆ ಪಡೆಯಲಾಗಿದೆ. ಇನ್ನು ಆದರ್ಶನಗರ ಪಿಎಸ್ಐ ಯತೀಶ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ಮಾಡಲಾಗಿದೆ. ಅಲ್ಲದೇ, ಆರೋಪಿತರ ಮೇಲೆ ಕಲಂ; 25 (1) (ಎ) ಭಾರತೀಯ ಆಯುಧ ಕಾಯ್ದೆ 1959ರ ಪ್ರಕಾರ ದೂರು ದಾಖಲಿಸಲಾಗಿದೆ. ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.