ವಿಜಯಪುರ: ಲಕ್ಷಾಂತರ ಮೌಲ್ಯದ ಒಣದ್ರಾಕ್ಷಿ ವಂಚನೆ ಪ್ರಕರಣದಲ್ಲಿ ಓರ್ವನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಕಮಲಕುಮಾರ ಸೋಹನಲಾಲ್, ಸಚೀನ ಮಹೇಂದ್ರಕುಮಾರ ಪಟೇಲ್, ಸುನೀಲ್, ಜಯೇಶ್, ಭರತ ಪಟೇಲ್, ನೀಲ್ ಪಟೇಲ್, ರೋಣಿಕಕುಮಾರ್ ಪಟೇಲ್, ಪಿಂಕೇಶ ಪಟೇಲ್ ವಿರುದ್ಧ ಕೇಸ್ ದಾಖಲಾಗಿತ್ತು. ಇನ್ನೂ ಕಮಲಕುಮಾರ ಸೋಹನಲಾಲ್ ಬಂಧಿತ ಆರೋಪಿಯಾಗಿದ್ದಾನೆ.
ಅಲ್ಲದೇ, ಆರೋಪಿಯಿಂದ 2.2 ಕೋಟಿ ಮೌಲ್ಯದ 117 ಟನ್ ಒಣದ್ರಾಕ್ಷಿ ಜಪ್ತಿಗೈದಿದ್ದಾರೆ. ಅಲ್ಲದೇ, ಎಂಟು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದರು.