ವಿಜಯಪುರ: ಗುಮ್ಮಟನಗರಿ ಖ್ಯಾತಿಯ ವಿಜಯಪುರ ಜಿಲ್ಲಾ ಪೊಲೀಸ ಇಲಾಖೆಯ ನಕಲಿ ಫೇಸ್ಬುಕ್ ಅಕೌಂಡ್ ಮಾಡಲಾಗಿದೆ. ಇನ್ನು ನಕಲಿ ಅಕೌಂಟ್ನಿಂದ ಜನತೆಗೆ ಹಣ ನೀಡುವಂತೆ ಆನ್ಲೈನ್ ಮೂಲಕ ಹಣ ನೀಡುವಂತೆ ಮೇಸಜ್ ಮಾಡಲಾಗುತ್ತಿದೆ.
ಅದಕ್ಕಾಗಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಸ್ಪಿ ಎಚ್.ಡಿ. ಆನಂದಕುಮಾರ ಮಾಹಿತಿ ನೀಡಿದ್ದು, ಜಿಲ್ಲಾ ಪೊಲೀಸ ಇಲಾಖೆಯ ಹೆಸರಿನಲ್ಲಿ ನಕಲಿ ಅಕೌಂಟ್ ಮಾಡಲಾಗಿದೆ. ಅದಕ್ಕಾಗಿ ದಯವಿಟ್ಟು ಹಣ ಕೇಳಿದ್ರೇ ಹಣ ನೀಡದಂತೆ ಎಸ್ಪಿ ಆನಂದಕುಮಾರ ಜನತೆಯಲ್ಲಿ ಮನವಿ ಮಾಡಿದರು. ಈಗಾಗಲೇ ಜಿಲ್ಲಾ ಹಿರಿಯ ಪೊಲೀಸ ಅಧಿಕಾರಿಗಳ ನಕಲಿ ಫೇಸ್ಬುಕ್ ಅಕೌಂಟ್ಗಳನ್ನು ಮಾಡಿದ್ದಾರೆ. ಇದರಿಂದ ಜನತೆ, ಸ್ಥಳೀಯರಿಗೆ ಹಣ ಹಾಕುವಂತೆ ಮೇಸಜ್ ಮಾಡುತ್ತಿದ್ದಾರೆ. ಅದಕ್ಕಾಗಿ ಜನತೆ ಯಾವುದೇ ಕಾರಣಕ್ಕೂ ಹಣ ನೀಡದಂತೆ ಎಸ್ಪಿ ಹೇಳಿದರು. ಅಲ್ಲದೇ, ಇಂತಹ ಕೆಲಸಗಳನ್ನು ಮಾಡುತ್ತಿರುವ ವಿರುದ್ಧ ಕ್ರಮ ತೆಗದುಕೊಳ್ಳಲಾಗುವುದು ಎಂದರು.