ವಿಜಯಪುರ: ಸಿದ್ದೇಶ್ವರ ಶ್ರೀಗಳ ಅಸ್ಥಿ ಸಂಗ್ರಹಣ ಕಾರ್ಯ ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಬುಧವಾರ ರಾತ್ರಿ ನಡೆಯಿತು. ಚಿತಾ ಭಸ್ಮದಿಂದ ಅಸ್ಥಿಯನ್ನು ಐದು ಮಡಿಕೆಯಲ್ಲಿ ಸಂಗ್ರಹಣೆ ಮಾಡಲಾಯಿತು. ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಅಸ್ಥಿಗಳ ಸಂಗ್ರಹಣಾ ಕಾರ್ಯ ಮಾಡಿದ್ದು, ದೊಡ್ಡ ಮಡಿಕೆಯಲ್ಲಿ ಚಿತಾಭಸ್ಮ ಸಂಗ್ರಹಿಸಲಾಯಿತು. ಇನ್ನು ಬ್ರಾಹ್ಮಿ ಮುಹೂರ್ತದಲ್ಲಿ ಚಿತಾ ಭಸ್ಮದ ಕಾರ್ಯ ನೆರವೇರಿತು. ಈ ವೇಳೆ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳು ಮಾತನಾಡಿ, ಪೂಜ್ಯ ಗುರುದೇವರ ಚಿತಾಭಸ್ಮವನ್ನು ಅವರ ಇಚ್ಚೆಯಂತೆ ಸಂಗ್ರಹ ಮಾಡಿದ್ದೇವೆ. ರವಿವಾರ 8ರಂದು ನದಿ ಸಾಗರ ಮತ್ತು ನದಿಗಳಲ್ಲಿ ವಿಸರ್ಜನೆ ಮಾಡಲಾಗುವುದು.
ತ್ರಿವೇಣಿ ಸಂಗಮ ಸುಕ್ಷೇತ್ರ ಕೂಡಲಸಂಗಮ ಮತ್ತು ಗೋಕರ್ಣದಲ್ಲಿ ವಿದಿವಿಧಾನದಲ್ಲಿ ವಿಸರ್ಜನೆ ಮಾಡಲಾಗುವುದು. ನಾಳೆ ಹುಣ್ಣಿಗೆ ಇರುವುದರಿಂದ ಅಸ್ತಿ ವಿಸರ್ಜನೆ ಮಾಡಲಾಗುತ್ತಿಲ್ಲ. ಸಿದ್ದೇಶ್ವರ ಅಪ್ಪನವರಿಗೆ ಕೃಷ್ಣೆಯ ಮೇಲೆ ಪ್ರೀತಿ ಇತ್ತು. ಅದರಂತೆ ಅವರ ಆಶಯದ ಮೇಲೆ ಅಸ್ತಿಯನ್ನು ವಿಸರ್ಜನೆ ಮಾಡಲಾಗುವುದು ಎಂದರು. ಈ ವೇಳೆಯಲ್ಲಿ ಸ್ವಾಮೀಜಿಗಳು, ಭಕ್ತರು ಉಪಸ್ಥಿತರಿದ್ದರು.