ವಿಜಯಪುರ: ವಿಶ್ವ ಕಪ್ ಕ್ರಿಕೆಟ್ ಪಂದ್ಯ ಹಿನ್ನೆಲೆ ಇಬ್ಬರು ಕ್ರಿಕೆಟ್ ಬುಕಿಯನ್ನು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ನಡೆದಿದೆ. ಮಲಘಾಣ ಕ್ರಾಸ್ ಬಳಿ ನಡೆದಿದೆ. ಷಣ್ಮುಖಯ್ಯ ವಿಭೂತಿ, ಸುನೀಲ ಬಿದರಕುಂದಿ ಬಂಧಿತ ಆರೋಪಿಗಳು. ಇನ್ನು ಇಂಡಿಯಾ ಹಾಗೂ ಇಂಗ್ಲೆಂಡ್ ವಿಶ್ವ ಕಪ್ ಪಂದ್ಯದ 29ನೇ ಪಂದ್ಯದಲ್ಲಿ ಇಂಡಿಯಾ ಗೆದ್ದರೆ ಮೂರು ಸಾವಿರಕ್ಕೆ ಐದು ಸಾವಿರ ಹಾಗೂ ಇಂಗ್ಲೆಂಡ್ ಗೆದ್ದರೆ 4 ಸಾವಿರಕ್ಕೆ 7 ಸಾವಿರ ಅಂತೆ ಬೆಟ್ಟಿಂಗ್ ಕಟ್ಟಿಸಿಕೊಳ್ಳುವಾಗ ಪೊಲೀಸರು ದಾಳಿಗೈದು ಬೆಟ್ಟಿಂಗ್ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ತಾಳಿಕೋಟಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.