ಹುಬ್ಬಳ್ಳಿ: ಇಂಡಿಯನ್ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ಹಾಗೂ ವೀರ ಕನ್ನಡಿಗ ಕೆ.ಎಲ್. ರಾಹುಲ್ ಬಡ ವಿದ್ಯಾರ್ಥಿಗೆ ಸಹಾಯಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೌದು..! ಹುಬ್ಬಳ್ಳಿಯ ಬಡ ವಿದ್ಯಾರ್ಥಿಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಶಿಕ್ಷಣಕ್ಕೆ ಹಣ ನೀಡಿ ಸಹಾಯ ಮಾಡಿದ್ದಾರೆ. ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರದ ಸಾಮಾನ್ಯ ಯುವಕ ಅಮೃತ ಮಾವಿನಕಟ್ಟಿ ದ್ವೀತಿಯ ಪಿಯುಸಿ ಕಾಮರ್ಸ್ ನಲ್ಲಿ 600ಕ್ಕೆ 571 ಅಂಕಗಳನ್ನು ಪಡೆದಿದ್ದರು. ಆದ್ರೇ, ಕಡು ಬಡತನದಲ್ಲಿರುವ ಈ ಯುವಕನಿಗೆ ತಂದೆ ತಾಯಿ ಇಲ್ಲ. ಓದಲೇ ಬೇಕು ಎಂಬ ಛಲದಿಂದ ಅಮೃತ ಮಾವಿನಕಟ್ಟಿ ಸಹೋದರ ನಿತೀನ್ ಜೊತೆಗೂಡಿ, ಹುಬ್ಬಳ್ಳಿಯ ಮಂಜುನಾಥ ಹೆಬಸೂರ ಎಂಬುವವರು ಭೇಟಿಯಾಗಿದ್ದಾನೆ. ಅದೃಷ್ಟವಶಾತ್ ಮಂಜುನಾಥ ಹೆಬಸೂರ ಅವರು ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್ ಅವರೊಂದಿಗೆ ಮಾತನಾಡಿ, ಯುವಕನ ಶಿಕ್ಷಣಕ್ಕೆ ಆರ್ಥಿಕ ನೆರವು ಕೊಡಿಸಿದ್ದಾರೆ. ಅಲ್ಲದೇ, ಕೂಡಲೇ ಎಚ್ಚೆತ್ತ ರಾಹುಲ್ ಅವರು ಆ ವಿದ್ಯಾರ್ಥಿಯ ಕಾಲೇಜಿನ ಎಲ್ಲ ಫೀಸನ್ನು ನಾನೇ ತುಂಬುತ್ತೇನೆ. ಅವರ ಅಕೌಂಟ್ ಡಿಟೇಲ್ಟ್ ತೆಗೆದುಕೊಳ್ಳಲು ಸೂಚಿಸಿದ್ದಾರೆ. ರಾಹುಲ್ ವಿದ್ಯಾರ್ಥಿಯ ಊಟಕ್ಕೆ, ಪುಸ್ತಕಕ್ಕೆ ಎಂದು ಸಂಪೂರ್ಣವಾಗಿ 75 ಸಾವಿರ ಹಣವನ್ನು ವಿದ್ಯಾರ್ಥಿಯ ಅಕೌಂಟ್ಗೆ ಹಾಕಿದ್ದಾರೆ. ಇದನ್ನು ತಿಳಿದ ಅಮೃತ ರಾಹುಲ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.