ಚಡಚಣ ::
ಮನೆಯೊಂದರಲ್ಲಿ ಅಡುಗೆ ಸಿಲಿಂಡರ್ ಲೀಕ್ ಆಗಿರುವ ಘಟನೆ ಭೀಮಾತೀರ ಖ್ಯಾತಿ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ತಳವಾರ್ ಓಣಿಯಲ್ಲಿ ನಡೆದಿದೆ. ರಾಮಚಂದ್ರ ಹಟ್ಟಿ ಮನೆಯಲ್ಲಿ ಅಡುಗೆ ಸಿಲಿಂಡರ್ ಲೀಕ್ ಆಗಿ ಮನೆಯಲ್ಲಿನ ವಸ್ತುಗಳು ಹಾನಿಯಾಗಿದ್ದಾವೆ. ಆದ್ರೇ, ಯಾವುದೇ ಪ್ರಾಣ ಹಾನಿಯಾಗಿಲ್ಲ. ಇನ್ನೂ ಅಡುಗೆ ಸಿಲಿಂಡರ್ ಲೀಕ್ನಿಂದ ಮನೆಯಲ್ಲಿ ಬೆಂಕಿ ಆವರಿಸಿದೆ,
ಅದಕ್ಕಾಗಿ ತಕ್ಷಣವೇ ಮನೆ ಕುಟುಂಬಸ್ಥರು ಓಡಿ ಹೊರಗೆ ಬಂದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಸ್ಥಳೀಯರ ನೆರವಿನಿಂದ ಬೆಂಕಿಯನ್ನು ನಿಂದಿಸಲಾಯಿತ್ತು. ಅವಘಡದಿಂದ ಅಪಾರ ಪ್ರಮಾಣದ ಮನೆಯಲ್ಲಿನ ವಸ್ತುಗಳಿಗೆ ಹಾನಿ ಉಂಟಾಗಿದೆ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.