ವಿಜಯಪುರ: ದಾಸ ಮಹಿಪತಿ ಸಿನಿಮಾ 35 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ಹೇಳಿದರು. ವಿಜಯಪುರ ನಗರದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಸ ಮಹಿಪತಿ ಸಿನೆಮಾ ಒಳ್ಳೆಯ ಪ್ರತಿಕ್ರಿಯೆ ಎಲ್ಲ ಕಡೆಯಿಂದ ಸಿಗುತ್ತಿದೆ. ಈಗಾಗಲೇ ಸಿನಿಮಾಗೆ ಬೇಕಿರುವ ಸಾಹಿತ್ಯ, ನಟ, ನಟಿಯನ್ನು ಫೈನಲ್ ಮಾಡಲಾಗಿದೆ. ಇಂದಿನಿಂದ ಸಿನಿಮಾ ಶೂಟಿಂಗ್ ಆರಂಭಿಸಲಾಗುವುದು ಎಂದರು. ಇಂದಿನ ಸಿನೆಮಾಗಳಲ್ಲಿ ರೌಡಿಶೀಟರ್, ಹತ್ಯಾಕಾಂಡ ಸೇರಿದಂತೆ ಹೊಡೆದಾಟ ಕಥೆಯುಳ್ಳ ಇರುತ್ತದೆ. ಆದ್ರೇ, ಸಾಹಿತ್ಯ, ಭಕ್ತಿ ಸಿನೆಮಾಗಳು ಕಡಿಮೆ ಆಗುತ್ತಿವೆ. ಅದಕ್ಕಾಗಿ ದಾಸ ಮಹಿಪತಿ ಸಿನೆಮಾ ಮಾಡಲು ಕೈ ಹಾಕಲಾಗಿದೆ ಎಂದರು.