ವಿಜಯಪುರ: ನಿನ್ನೆ ಮೇಲ್ ಮೂಲಕ ಪುರಾತತ್ವ ಇಲಾಖೆ ಅಧೀನದ ಮ್ಯೂಸಿಯಂಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಮೇಲ್ ಹಾಕಿದ್ದರು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾಹಿತಿ ನೀಡಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ವಿಜಯಪುರದ ಗೋಲಗುಂಬಜ್ ಆವಣದ ಮ್ಯೂಸಿಯಂನಲ್ಲಿ ತಪಾಸನೆ ಮಾಡಲಾಗಿದೆ. ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನದಳದಿಂದ ತಪಾಸನೆ ಮಾಡಲಾಗಿತ್ತು. ಆದರೆ ಯಾವುದೇ ಸ್ಪೋಟಕ ಕಂಡು ಬಂದಿಲ್ಲ. ಇದರಿಂದ ಸಾರ್ವಜನಿಕರು ಗಾಬರಿ ಆಗುವ ಆವಶ್ಯಕತೆಯಿಲ್ಲ. ನಿನ್ನೆ ಇಮೇಲ್ ಬಂದ ಬೆದರಿಕೆ ಸುಳ್ಳು ಬೆದರಿಕೆಯಾಗಿದೆ ಎಂದರು.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)