ವಿಜಯಪುರ: 8 ಜನ ಕಾರ್ಮಿಕರಲ್ಲಿ 7 ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಎಲ್ಲರ ಮೃತದೇಹ ಹೊರಕ್ಕೆ ತೆಗೆಯಲಾಗಿದೆ ಎಂದು ಎಸ್ಪಿ ಋಷಿಕೇಶ್ ಸೋನವಾಣೆ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ವಿಜಯಪುರ ರಾಜಗುರು ಫುಡ್ ಗೋದಾಮಿನಲ್ಲಿ ಬಿಹಾರ ಕಾರ್ಮಿಕರು ಸಿಲುಕಿಕೊಂಡಿದ್ದರು. ಸತತ 17ಗಂಟೆ ಕಾರ್ಯಾಚರಣೆ ನಡೆಸಲಾಗಿದೆ. 8 ಜನ ಕಾರ್ಮಿಕರಲ್ಲಿ 7ಜನ ಕಾರ್ಮಿಕರು ಅಸುನೀಗಿದ್ದಾರೆ.
7ನೇ ಕಾರ್ಮಿಕನ ಮೃತ ದೇಹಗಳನ್ನು ರಕ್ಷಣಾ ಕಾರ್ಯಾಚರಣೆ ನಡೆಸಿ, ಹೊರಗಡೆ ತೆಗೆಯಲಾಗಿದೆ.
ರಾಜಗುರು ಫುಡ್ ಮಾಲೀಕ, ಸೂಪರ್ವೈಸರ್ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ ಎಂದು ಎಸ್ಪಿ ಋಷಿಕೇಶ್ ತಿಳಿಸಿದರು. ಮೃತಪಟ್ಟಿರುವ ಬಗ್ಗೆ ವಿವಿರ: ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಫುಡ್ಸ್ ಗೋದಾಮಿನಲ್ಲಿ ಮೆಕ್ಕೆಜೋಳ ಸಂಸ್ಕರಣಾ ಘಟಕ ಕುಸಿತ ಪ್ರಕರಣದಲ್ಲಿ 7 ಜನ ಕಾರ್ಮಿಕರ ಶವಗಳನ್ನು ರಕ್ಷಣಾ ತಂಡ ಹೊರಕ್ಕೆ ತೆಗೆದಿದ್ದಾರೆ. ಬಿಹಾರ ಮೂಲದ ಕಾರ್ಮಿಕರಾದ ರಾಜೇಶ್ ಮುಖಿಯಾ 25, ರಾಮ್ರೀಜ್ ಮುಖಿಯಾ 29, ಶಂಬು ಮುಖಿಯಾ 26, ರಾಮ್ ಬಾಲಕ್ 38, ಲೋಖಿ ಜಾಧವ್ 56, ಕಿಶನಕುಮಾರ 20, ದಾಲನಚಂದ ಮುಖಿನ ಮೃತ ಪಟ್ಟ ಏಳು ಜನರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ನಿನ್ನೆ ಸಾಯಂಕಾಲದಿಂದ ಇಲ್ಲಿಯವರೆಗೂ ಸತತ 17 ಗಂಟೆಗಳ ಕಾಲ ರಕ್ಷಣಾ ಹಾಗೂ ಪತ್ತೆ ಕಾರ್ಯ ನಡೆಸಲಾಗಿದೆ.
![](https://karnataka1news.com/wp-content/uploads/2023/12/IMG-20231204-WA0088-1024x461.jpg)