ವಿಜಯಪುರ: ಹಿರಿಯ ಪತ್ರಕರ್ತನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಮಾಡಿ ಗಣ್ಯರಿಗೆ ಹಣ ಕೇಳುತ್ತಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ಗೋಳಗುಮ್ಮಟ್ ನಿವಾಸಿ ಹಾಗೂ ಹಿರಿಯ ಪತ್ರಕರ್ತ ಶಡಕ್ಷರಿ ಕಂಪನೂರ ಹೆಸರಿನಲ್ಲಿ ದುಷ್ಕರ್ಮಿಗಳು ನಕಲಿ ಅಕೌಂಟ್ ಮಾಡಿದ್ದಾರೆ. ಬಳಿಕ ಶಡಕ್ಷರಿ ಸ್ನೇಹಿತರಿಗೆ ಅರ್ಜೆಂಟ್ ಇದೇ ಹಣ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಅಲ್ಲದೇ, 5 ಅಥವಾ 10 ಸಾವಿರ ಹಣ ನೀಡಿ ಎಂದು ಮೇಸಜ್ ಮಾಡುತ್ತಿದ್ದಾರೆ. ಅದಕ್ಕಾಗಿ ಹಣ ನೀಡದಂತೆ ಪತ್ರಕರ್ತ ಶಡಕ್ಷರಿ ಮನವಿ ಮಾಡಿದ್ದಾರೆ. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.