ವಿಜಯಪುರ: ಲಂಚ ಸ್ವೀಕರಿಸುವ ವೇಳೆಯಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಸಹಾಯಕ ಅಭಿವೃದ್ಧಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ದಯಾನಂದ ಸಂಗಣ್ಣ ಬಲ್ಲಾಳ ಊರ್ಫ್ ಬಡಿಗೇರ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ. ಇನ್ನು ಇಂಡಿಯ ಅಂಜುಟಗಿ ನಿವಾಸಿ ಕಾಶಿಬಾಯಿ ಮಡಿವಾಳರ ಎಮ್ಮೆಯನ್ನು ಸಾಕಲು ಸಹಾಯ ಧನ ಮತ್ತು ಸಾಲ ಸೇರಿ 50,000 ಅರ್ಜಿಯನ್ನು ಹಾಕಿ ಫಲಾನುಭವಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ದಾಖಲೆಗಳನ್ನು
ಮೇಲಾಧಿಕಾರಿಗಳಿಗೆ ಕಳಿಸಲು ದಯಾನಂದ 5 ಸಾವಿರ ಲಂಚದ ಬೇಡಿಕೆಗೆಯಿಟ್ಟು 3 ಸಾವಿರ ನಗದು ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿಗೈದು ಆರೋಪಿ ಹಾಗೂ ಹಣವನ್ನು ಜಪ್ತಿಗೈದಿದ್ದಾರೆ. ಈ ಕುರಿತು ವಿಜಯಪುರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.