ವಿಜಯಪುರ: ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರು ಮಾತು ಎಂದಿಗೂ ಸತ್ಯ. ಅದರಂತೆ ವಿಜಯಪುರದ ಬಹುಕೋಟಿ ಒಣದ್ರಾಕ್ಷಿ ವಂಚನೆ ಪ್ರಕರಣವಾಗಿತ್ತು. ಈ ಪ್ರಕರಣದಲ್ಲಿ ನೂರಾರು ಅನ್ನದಾತರ ಭವಿಷ್ಯ ಇತ್ತು. ಆದ್ರೇ, ನಮ್ಮ ಜಿಲ್ಲೆಯ ಪೊಲೀಸರ ಎದೆಗಾರಿಕೆಯಿಂದಾಗಿ ಗನ್ಗೂ ಹಿಂದೇಟು ಹಾಕದೇ ಪ್ರಕರಣವನ್ನು ಭೇದಿಸಿ ಜಿಲ್ಲೆಯ ರೈತರಿಗೆ ಅನ್ನದಾತರಾಗಿದ್ದಾರೆ.
ಈ ಬಗ್ಗೆ ಸ್ವತಃ ಕಣ್ಣಾರೇ ಕಂಡಿರುವ ರೈತ ಅಣ್ಣಪ್ಪನವರು ಹೇಳಿದ್ದು ಹೀಗೆ..
ವಂಚನೆಕೋರರು ಗನ್ ತೋರಿಸಿ ಹಲ್ಲೆಗೆ ಮುಂದಾಗಿದ್ದರು. ಆದ್ರೂ, ನಮ್ಮ ಜಿಲ್ಲೆಯ ಸಿಪಿಐ ರಮೇಶ ಅವಜಿ, ಪಿಎಸ್ಐ ಗೆಜ್ಜಿ ಪ್ರಾಣವನ್ನು ಮುಡಿಪಾಗಿಟ್ಟು ರೈತರ ವಂಚನೆ ಪ್ರಕರಣ ಭೇದಿಸಿದ್ದಾರೆ. ಇಲ್ಲದೇ ಹೋದ್ರೇ ನಾವು ಸಾವಿಗೆ ಮುಂದಾಗಬೇಕಿತ್ತು ಎಂದಿದ್ದಾರೆ.
ನಮ್ಮ ಜಿಲ್ಲಾ ಪೊಲೀಸ ಇಲಾಖೆಗೆ K1N ಕಡೆಯಿಂದ ಒಂದು ಸೆಲ್ಯೂಟ್…