ವಿಜಯಪುರ: ಅಕ್ರಮ ಶಿಕ್ಷಕರ ನೇಮಕಾತಿ ಹಗರಣದಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಶಿಕ್ಷಕನ್ನು ಸಿಓಡಿಯವರು ವಶಕ್ಕೆ ಪಡೆದುಕೊಂಡಿದ್ದಾರೆ.
2012ರಿಂದ 2014ರ ಅವಧಿಯಲ್ಲಿ ಅಕ್ರಮ ಶಿಕ್ಷಕನಾಗಿ ನೇಮಕವಾಗಿರುವ ಆರೋಪ ಹಿನ್ನಲೆ ಶಿಕ್ಷಕ ಅಶೋಕ ಚವ್ಹಾಣ ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರು ಸಿಓಡಿ ಅಧಿಕಾರಿಗಳ ಸೂಚನೆ ಮೇರೆಗೆ ಕಲಬುರಗಿ ಸಿಓಡಿ ಅಧಿಕಾರಿಗಳು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.