ಮಂಗಳೂರು: ಸುಡುವ ಇಸ್ತ್ರಿ ಪೆಟ್ಟಿಗೆಯಿಂದ ಬೃಹತ್ ಅನಾಹುತ ಘಟನೆಯೊಂದು ನಡೆದಿದೆ.
ಬಿಸಿಯಾದ ಇಸ್ತ್ರಿಯಿಂದ ಹಾಸಿಗೆಗೆ ಬೆಂಕಿಗಾಹುತಿ ಆಗಿರುವ ಘಟನೆ ಮಂಗಳೂರಿನ ದೇರಳಕಟ್ಟೆಯ ಫ್ಲ್ಯಾಟ್ ನಲ್ಲಿ ನಡೆದಿದೆ. ಶಾಹೀದ್ ಎಂಬುವವರ ಕಾಳಜಿಯಿಂದ ಅನಾಹುತ ತಪ್ಪಿದೆ. ರೂಮ್ನಲ್ಲಿ ವಾಸಿಸುವ ವಿದ್ಯಾರ್ಥಿನಿ ಬೆಳಗ್ಗೆ ಕಾಲೇಜಿನಲ್ಲಿ ಕಾರ್ಯಾಗಾರಕ್ಕಾಗಿ ಬಟ್ಟೆಗೆ ಇಸ್ತ್ರಿ ಮಾಡಿ ಬೇಗನೇ ಕಾಲೇಜಿಗೆ ತೆರಳಿದ್ದರು. ಹೋಗುವಾಗ ಇಸ್ತ್ರಿಪೆಟ್ಟಿಗೆಯನ್ನು ಮಲಗುವ ಹಾಸಿಗೆಯ ಮೇಲೆಯೇ ಇಟ್ಟು ಹೋಗಿದ್ದರು. ಇದರಿಂದ ಬೆಂಕಿ ಅವಘಡ ಸಂಭವಿಸಿದೆ. ಆದ್ರೇ, ಯಾವುದೇ ಪ್ರಾಣ ಹಾನಿಯಾಗಿಲ್ಲ.