ವಿಜಯಪುರ: ಚಲಿಸುತ್ತಿದ್ದ ಲಾರಿಯ ಸ್ಟೇರಿಂಗ್ ಕಟ್ ಆಗಿರುವ ಪರಿಣಾಮ ಲಾರಿ ಪಲ್ಟಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ರಸ್ತೆಯ ಸಾಗರ ಹೋಟೆಲ್ ಬಳಿ ನಡೆದಿದೆ.
40 ವರ್ಷದ ಲಾರಿ ಡ್ರೈವರ್ ವಿಕಾಸ ಗಾಯಗೊಂಡಿದ್ದಾನೆ. ಅಲ್ಲದೇ, ರಸ್ತೆ ಅಪಘಾತಕ್ಕೆ ಏಕಾಏಕಿ ಸ್ಟೇರಿಂಗ್ ಕಟ್ ಆಗಿದೆ. ಇದರಿಂದ ಲಾರಿ ಕಂಟ್ರೋಲ್ ಸಿಗದೇ ಪಲ್ಟಿಯಾಗಿದೆ. ಆದ್ರೇ, ಯಾವುದೇ ಪ್ರಾಣ ಹಾನಿಯಾಗಿಲ್ಲ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.