ರಾಯಚೂರು: ಆಕಸ್ಮಿಕವಾಗಿ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕ್ಲಬ್ ಮೈದಾನದಲ್ಲಿ ನಡೆದಿದೆ. ಕಂಪ್ಯೂಟರ್ ಅಂಗಡಿಗಳಿಗೆ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಒಂದು ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಅಲ್ಲದೇ, ತಕ್ಷಣವೇ ಅಗ್ನಿಶಾಮಕ. ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಕೆಬಿ ಆಫೀಸರ್ ಮಾತಿನಂತೆ ಕರೆಂಟ್ ತೆಗೆಯಲಾಯಿತು. ಅಲ್ಲದೇ, ಅಂದಾಜು ಎರಡು ಲಕ್ಷದಷ್ಟು ಹಾನಿ ಆಗಿದೆ.