ವಿಜಯಪುರ: ಜಮೀನಿನಲ್ಲಿ ಹುಲ್ಲು ಚೆಲ್ಲುವಾಗ ಹಾವು ಕಚ್ಚಿರುವ ಪರಿಣಾಮ ವ್ಯಕ್ತಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬೇನಕೊಟಗಿ ಗ್ರಾಮದಲ್ಲಿ ನಡೆದಿದೆ.
ಬೇನಕೊಟಗಿ ಗ್ರಾಮದ ನಿವಾಸಿಯಾದ 53 ವರ್ಷದ ನಿಂಗನಗೌಡ ಬಿರಾದಾರ ಮೃತಪಟ್ಟಿರುವ ದುರ್ದೈವಿ. ಇನ್ನು ಜಮೀನಿನಲ್ಲಿರುವ ಹುಲ್ಲು ಕತ್ತರಿಸಿ, ತದನಂತರ ಹುಲ್ಲನ್ನು ಚೆಲ್ಲುವಾಗ ಹಾವು ಕಚ್ಚಿದೆ. ಇದರಿಂದ ನಿಂಗನಗೌಡ ಬಿರಾದಾರ ಮೃತಪಟ್ಟಿದ್ದಾರೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.