ವಿಜಯಪುರ: ಡಿಸಿಸಿ ಬ್ಯಾಂಕ್ನಲ್ಲಿ ನಡೆದಿದ್ದ ಕೋಟ್ಯಾಂತರ ಅವ್ಯವಹಾರ ಸಿಒಡಿ ತನಿಖೆ ನಡೆಯುತ್ತಿದೆ ಎಂದು ಶಾಸಕ ಶಿವಾನಂದ ಪಾಟೀಲ ಮಾಹಿತಿ ನೀಡಿದರು.
ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದುರದೃಷ್ಟಕರವಾಗಿ ಇಂತಹ ಒಂದು ಎರಡು ಘಟನೆಗಳು ಆಗುತ್ತವೆ. ಈಗಾಗಲೇ ಇಬ್ಬರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ಡಿಸಿಸಿ ಬ್ಯಾಂಕ್ ಸಿಬ್ಬಂದಿಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ. ಅವ್ಯವಹಾರದ ಪತ್ರಗಳು ವ್ಯವಸ್ಥಿತವಾಗಿ ಮಾಡಿದ್ರೂ, ಇದೀಗ್ ಸಿಒಡಿ ತನಿಖೆ ನಡೆಯುತ್ತಿದೆ ಎಂದರು.