ವಿಜಯಪುರ: ಫೋಟೋ ಸ್ಟುಡಿಯೋದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಸೋಮವಾರ ತಡರಾತ್ರಿ ವಿಜಯಪುರ ನಗರದ ಕೆಸಿ ಮಾರುಕಟ್ಟೆನಲ್ಲಿ ನಡೆದಿದೆ.
ಸಂಗಮ ಫೋಟೋ ಸ್ಟುಡಿಯೋ ಮಾಲೀಕ ಆರ್ಎ ಇಂಡಿಕರ್ ಎಂಬುವರ ಅಂಗಡಿಯಲ್ಲಿ ಕಳ್ಳರು ಕಳ್ಳತನಗೈದಿದ್ದು, ಕ್ಯಾಮೆರಾ, ನಗದು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.