ವಿಜಯಪುರ: ಪಿಕೆಪಿಎಸ್ ಸಂಘದ ಕಬ್ಬಿಣದ ಕಿಟಕಿ ಮುರಿದು ಸಂಘದಲ್ಲಿ ಸಾವಿರಾರು ನಗದು ದೋಚಿಕೊಂಡು ಕಳ್ಳ ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದಲ್ಲಿ ನಡೆದಿದೆ.
ಕುಂಟೋಜಿ ಪಿಕೆಪಿಎಸ್ ಸಂಘದಲ್ಲಿದ್ದ 60,749 ನಗದು ದೋಚಿಕೊಂಡು ಕಳ್ಳ ಎಸ್ಕೇಪ್ ಆಗಿದ್ದಾನೆ. ಅಲ್ಲದೇ, ಕಳ್ಳತನದ ದೃಶ್ಯಗಳು ಸಂಘದ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಘಟನಾ ಸ್ಥಳಕ್ಕೆ ಪೊಲೀಸ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.