ವಿಜಯಪುರ: ವರದಿ ಮಾಡಲು ತೆರಳಿದ ಖಾಸಗಿ ವಾಹಿನಿ ವರದಿಗಾರನ ಮೇಲೆ ಅಧಿಕಾರಯೋರ್ವ ಹಲ್ಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದಿದೆ. ಖಾಸಗಿ ವಾಹಿನಿ ವರದಿಗಾರ ಶರಣಪ್ಪ ಮಾದರ ಹಲ್ಲೆಗೊಳಗಾದವರು. ಇನ್ನು ಕೃಷ್ಣ ಮೇಲ್ದಂಡೆ ಯೋಜನೆ ಪುನರ್ವಸತಿ ಎಇಇ ಎಸ್ಟಿ ಬಬಲೇಶ್ವರ ಹಲ್ಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ವಿವಿರ..
ಮೊಸರುನಾಡು ಖ್ಯಾತಿಯ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ 16ನೇ ವಾರ್ಡ್ನಲ್ಲಿ ಸೋಲಾರ್ ದೀಪ ಅಳವಡಿಸಿದಾಗ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ತೌಸೀಪ್ ಗಿರಗಾಂವಿ ಸುದ್ದಿಗೆ ಆಹ್ವಾನ ನೀಡಿದರು. ಈ ವೇಳೆ ವಿಸ್ತೃತ ವರದಿ ಮಾಡಿ, ತದನಂತರ ಎಇಇ ಬಬಲೇಶ್ವರ ಮಾಹಿತಿ ಕೇಳುವಾಗ ಏಕಾಏಕಿ ನನ್ಮೇಲೆ ಹಲ್ಲೆಗೈದು ಮೊಬೈಲ್ ಹಾನಿ ಮಾಡಿದ್ದಾರೆ. ಅಲ್ಲದೇ, ನಿಮ್ಮವರನ್ನು ನೋಡಿದ್ದೇನೆ ಎಂದು ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಕುರಿತು ಕೊಲ್ಹಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.