ವಿಜಯಪುರ: ಹಣ, ಚಿನ್ನಕ್ಕಾಗಿ ವೃದ್ಧೆಯ ಮೇಲೆ ಸಂಬಂಧಿಕರು ಹಲ್ಲೆಗೈದು ಚಿನ್ನ, ಹಣ ದೋಚಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುಬ್ಬೇವಾಡ ಗ್ರಾಮದಲ್ಲಿ ನಡೆದಿದೆ.
ಅಯ್ಯಮ್ಮ ಅಶೋಕ ಗತಾಟೆ ಹಲ್ಲೆಗೊಳಗಾದವರು. ಇನ್ನು ಶ್ರೀಶೈಲ್ ಆಲೂರ್, ರೇಣುಕಾ ಆಲೂರ್, ವೀರೇಶ ಆಲೂರ, ಈರಪ್ಪ ಆಲೂರ, ಪ್ರಭು ಆಲೂರ, ಸಾತ್ತವ್ವ ಆಲೂರ ಹಲ್ಲೆಗೈದಿದ್ದಾರೆ. ಅಲ್ಲದೇ, ಅಯ್ಯಮ್ಮನ ಮೇಲೆ ಹಲ್ಲೆಗೈದು 13 ತೊಲಿ ಚಿನ್ನ, ಬ್ಯಾಂಕ್ನಲ್ಲಿದ್ದ 4 ಲಕ್ಷ ಹಣ ವಂಚನೆಯಿಂದ ಕಸೆದುಕೊಂಡಿದ್ದಾರೆ.
![](https://karnataka1news.com/rugleeps/2022/09/IMG_20220912_203105.jpg)
ಅದಕ್ಕಾಗಿ ನನಗೆ ನ್ಯಾಯ್ ಕೊಡಿಸಬೇಕು ಎಂದು ಅಯ್ಯಮ್ಮ ಮನವಿ ಮಾಡಿದ್ದಾರೆ. ಈ ಕುರಿತು ಕಲಕೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.