ವಿಜಯಪುರ: ವೀರ ಸಾವರ್ಕರ್ ಫೋಟೋ ಅಂಟಿಸಿದ್ದು ನಾವೇ ಎಂದು ವಿಜಯಪುರದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಹೇಳಿದರು.
ಕಾಂಗ್ರೆಸ್ ನವರು ಪದೇ ಪದೇ ಸಾವರ್ಕರ್ ವಿವಾದ ಸೃಷ್ಟಿ ಮಾಡ್ತಿದ್ದಾರೆ. ಅವರು ಸುಟ್ಟು ಹಾಕಿದ್ದಾರೆ. ನಾವು ಅವರ ಫೋಟೋ ಅಂಟಿಸಿರೋದು ದೊಡ್ಡದೇನಲ್ಲ. ಕಾಂಗ್ರೆಸ್ ನವರು ಸಾವರ್ಕರ್ ಗೌರವಿಸಬೇಕು. ಅವರ ಬಗ್ಗೆ ಪುಸ್ತಕ ಓದಬೇಕು. ಅಲ್ಲದೇ, ಕಾಂಗ್ರೆಸ್ ನವರು ಇಲ್ಲಿಗೆ ನಿಲ್ಲಿಸಿದ್ರೆ ಸರಿ. ಇಲ್ಲದೇ ಹೋದ್ರೇ ಕಾಂಗ್ರೆಸ್ ನವರ ಮನೆ,ಕಚೇರಿಗೆ ಅಂಟಿಸಿ ಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.