ಧಾರವಾಡ: ವೈಯಕ್ತಿಕ ದ್ವೇಷದಿಂದ ಯುವಕರ ಗುಂಪು ಯುವಕನ ಕಣ್ಣಿನ ಹುಬ್ಬಿಗೆ ಚಾಕು ಹಾಕಿ ಪರಾರಿಯಾಗಿರುವ ಘಟನೆ ಧಾರವಾಡದ ಆಂಜನೇಯನಗರದಲ್ಲಿ ನಡೆದಿದೆ.
ಗಣೇಶ ವಿಸರ್ಜನೆಯಲ್ಲಿ ಗಲಾಟೆಯಾಗಿದೆ. ಈ ವೇಳೆಯಲ್ಲಿ ಪ್ರಜ್ವಲ ಎಂಬ ಯುವಕನ ಮೇಲೆ ವಿನಯ, ವಿಠ್ಠಲ, ವಿಜಯ ಸೇರಿದಂತೆ ಹಲವರು ಹಲ್ಲೆಗೈದು ಪರಾರಿಯಾಗಿದ್ದಾರೆ. ಪ್ರಜ್ವಲನನ್ನ ಕಿಮ್ಸಗೆ ರವಾನೆ ಮಾಡಲಾಗಿದ್ದು, ಧಾರವಾಡ ಉಪನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.