ವಿಜಯಪುರ: ಬಾಲಕನ ಮೇಲೆ ನಾಯಿ ದಾಳಿ ಮಾಡಿರುವ ಘಟನೆ ವಿಜಯಪುರ ನಗರದ ಕೊಂಚಿಕೊರವರ ಓಣಿಯಲ್ಲಿ ನಡೆದಿದೆ.
ಅಂಗಡಿ ಹೋಗಿದ್ದ ಕೊಂಚಿಕೊರವ ಓಣಿ ನಿವಾಸಿ 9 ವರ್ಷದ ವಿಷ್ಣು ಅನ್ನೋ ಬಾಲಕನ ಮೇಲೆ ಶ್ವಾನ ಅಟ್ಯಾಕ್ ಮಾಡಿದ್ದು, ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ. ಕೈ ರೆಟ್ಟೆ, ಬೆನ್ನಿನ ಭಾಗದಲ್ಲಿ ಕಚ್ಚಿರುವ ಹುಚ್ಚು ನಾಯಿ ಕಚ್ಚಿದೆ. ಸಾವಿನ ದವಡೆಯಿಂದ ಬಾಲಕನ್ನ ಸ್ಥಳೀಯರು ಪಾರು ಮಾಡಿದ್ದಾರೆ. ಗೋಳಗುಮ್ಮಟ ಏರಿಯಾದಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದೆ. ಕಡಿವಾಣ ಹಾಕುವಂತೆ ಮಹಾನಗರ ಪಾಲಿಕೆ ಸ್ಥಳೀಯರು ಆಗ್ರಹಿಸಿದ್ದಾರೆ.