ವಿಜಯಪುರ: ನಗರದ ಆರಾಧ್ಯದೈವ ಸಿದ್ದೇಶ್ವರ ಜಾತ್ರೆಗೆ ಗುರುವಾರ ಸಂಜೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಗೋವು ಪೂಜೆ ಮಾಡುವ ಮೂಲಕ ಜಾತ್ರೆಗೆ ಚಾಲನೆ ದೊರೆಯಿತು. ನಂತರ ನಂದಿಕೋಲ ಪೂಜೆ ಮಾಡಿದ ಗಣಪತಿ ಚೌಕ್ ಗೆ ತೆರಳಿ ಗಣೇಶನಿಗೆ ಅಭಿಷೇಕ, ಪೂಜೆ ಸಲ್ಲಿಸಲಾಯಿತು. ನಂತರ ಸಿದ್ದೇಶ್ವರ ದೇವಸ್ಥಾನ ಕ್ಕೆ ನಂದಿಕೊಲಗಳ ಮೆರವಣಿಗೆ ಆಗಮಿಸಿತು. ಜಾತ್ರೆ ಅಂಗವಾಗಿ ಭಕ್ತರು ಸಿದ್ದೇಶ್ವರನ ದರ್ಶನ ಪಡೆದುಕೊಂಡು, ನಂದಿಕೋಲ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.