ವಿಜಯಪುರ: ಅಂತ್ಯಸಂಸ್ಕಾರ ವೇಳೆ ಪಟಾಕಿ ಕಿಡಿ ಸಿಡಿದು ಪರಿಣಾಮ ತೋಟದ ವಸತಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ಸಂಭವಿಸಿದೆ. ಬೆಂಕಿ ಅವಘಡದಲ್ಲಿ ಆರು ಬೈಕ್ಗಳು ಭಸ್ಮವಾಗಿವೆ. ಜಯನಗೌಡ ಪಾಟೀಲ ಎಂಬುವರಿಗೆ ವಸತಿಯಲ್ಲಿ ಘಟನೆಯಿಂದ ಅಪಾರ ಹಾನಿಯಾಗಿದೆ. ಬೆಂಕಿ ಅವಘಡದಲ್ಲಿ ಗುಡಿಸಲಿನಲ್ಲಿದ್ದ ಹತ್ತು ಚೀಲ ತೋಗರಿ ಸೇರಿದಂತೆ ಅನೇಕ ವಸ್ತುಗಳು ಹಾನಿಯಾಗಿದೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.