ವಿಜಯಪುರ: ವೃದ್ಧೆಗೆ ಕಬ್ಬಿನ ಚಕ್ಕಡಿ ಡಿಕ್ಕಿಯಾಗಿರುವ ಪರಿಣಾಮ ವೃದ್ಧೆ ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ನಂದಿ ಸಕ್ಕರೆ ಕಾರ್ಖಾನೆ ಬಳಿ ನಡೆದಿದೆ. ಗುಣದಾಳ ಗ್ರಾಮದ 65 ವರ್ಷದ ಯಮನವ್ವ ಕಂಬಾಗಿ ಮೃತಪಟ್ಟಿರುವ ವೃದ್ಧೆ. ಇನ್ನೂ ಬ್ಯಾಂಕ್ಗೆ ಹೋಗಿ ಹಣ ತೆಗೆದುಕೊಂಡು ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.