ಧಾರವಾಡ: ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ವತಿಯಿಂದ ಇವರ ನೇತೃತ್ವದಲ್ಲಿ ನಡೆದ ಪರಿಸರ ರಕ್ಷಣೆ ಕಾಯ೯ಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ರೋಟರಿಯನ್ ನಜೀರ್ ಬೋಸರ್ಡವಾಲಾ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಪರಿಸರ ರಕ್ಷಣೆ ಕುರಿತು ಮಾತನಾಡಿದರು . ಮಾಜಿ ಜಿಲ್ಲಾ ಗವರ್ನರ್ ಆದ ರೋಟರಿಯನ್ ಗಣೇಶ್ ಭಟ್ ಅಸಿಸ್ಟೆಂಟ್ ಗವರ್ನರ್ ಬಸವರಾಜ ಕನದಾಳೆ ಹಾಗೂ ಡಿಪೋಟಿ ರೇಂಜ್ ಫಾರೆಸ್ಟ್ ಆಫೀಸರ್ ಎಲ್. ನಾಯಕ್ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿ ಗಿಡ ನೆಟ್ಟು ಪರಿಸರ ಹಾಗೂ ಪ್ರಾಣಿಗಳ ಬಗ್ಗೆ ಅರಿವು ಮೂಡಿಸಿದರು. ರೋಟರಿ ಕ್ಲಬ್ ಧಾರವಾಡ ನೂತನ ಅಧ್ಯಕ್ಷರಾದ ರೋಟರಿಯನ್ ಡಿ. ಭುವನೇಶ್ ಆರಾಧ್ಯ ಇವರು ತಮ್ಮ ಕಾಲಾವಧಿಯಲ್ಲಿ ನೂರಕ್ಕಿಂತ ಹೆಚ್ಚು ಗಿಡಗಳನ್ನು ನೆಡುವ ಕಾರ್ಯವನ್ನು ಇಂದು ಪ್ರಾರಂಭಿಸಿದ್ದಾಗಿ ಹೇಳಿ ಈ ಕಾರ್ಯಕ್ಕೆ ಕೈ ಜೋಡಿಸಿದಂತ ರೋಟರಿಯನ್ ಡಾ . ಸತೀಶ ಇರಕಲ್.ಡಾ. ವಾಣಿ ಇರಕಲ್ ಇವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಈ ವೇಳೆ ಅನೇಕ ರೋಟರಿಗಳು ಗಿಡ ರಕ್ಷಣೆಗಾಗಿ ಬೇಕಾಗುವ ಟ್ರೀ ಗಾರ್ಡುಗಳನ್ನು ನೀಡಲಿಕ್ಕೆ ಮುಂದಾದರು . ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ನೂತನ ಕಾರ್ಯದರ್ಶಿಗಳಾದ ಡಾ . ವಿಶ್ವನಾಥ್ ಪಾಟೀಲ್ , ಪುಂಡಲಿಕ್ ಜಗದಲ್ಲಿ , ರಾಜು ಬಿಜೆ೯ನ್ನವರ , ಶರಣಬಸವ ಸಂಧ್ಯಾ ಜಗದಾಳೆ , ವಾಸುಕಿ ಸಂಜೆ , ಬಿನಾಯಿ ಮೋಮಾಯ , ಹಾಗೂ ಚಂದ್ರಿಕಾ ಲೇಔಟ್ ನಿವಾಸಿಗಳು ಮತ್ತು ಇತರರೊಟರಿಯನ್ನು ಸದಸ್ಯರು ಉಪಸ್ಥಿತರಿದ್ದು ಗಿಡ ನೆಡುವ ಹಾಗೂ ಪರಿಸರ ಸ್ವಚ್ಛತೆಯ ಕಾರ್ಯವನ್ನು ಹಮ್ಮಿಕೊಂಡರು.