ವಿಜಯಪುರ: ಸಾಲಬಾಧೆ ತಾಳದೆ ರೈತನೊಬ್ಬ ತನ್ನದೇ ಜಮೀನಿನಲ್ಲಿ ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಾಂತಗೌಡ ಬಲವಂತರಾಯ ಬಿರಾದಾರ(59) ಆತ್ಮಹತ್ಯೆಗೆ ಶರಣು. 4 ಎಕರೆ 10 ಗುಂಟೆ ಜಮೀನು ಹೊಂದಿದ್ದು, ಬರಗಾಲ ಹಿನ್ನೆಲೆ ಹೊಲದಲ್ಲಿನ ಬೆಳೆಗೆ ನೀರುಣಿಸಲು ವಿವಿಧೆಡೆ ಸಾಲ ಮಾಡಿ ಪಂಪಸೆಟ್ ಖರೀದಿಸಿದ್ದರು. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ಕಿರಲಿಲ್ಲ. ಇದಲ್ಲದೆ ಕೃಷಿಗಾಗಿಯೂ ಬ್ಯಾಂಕ್ ಸೇರಿ ಹಲವೆಡೆ ಸಾಲ ಮಾಡಿಕೊಂಡಿದ್ದರು. ಇನ್ನೂ ವಿವಿಧ ಕಡೆಗೆ 5.45 ಲಕ್ಷ ಸಾಲವಿತ್ತು ಎಂದು ಮೂಲಗಳು ತಿಳಿಸಿವೆ. ತಾಳಿಕೋಟಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)