ವಿಜಯಪುರ: ಬೈಕ್ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ನಂತರ ಲಾರಿ ಕೆಳಗೆ ಸಿಕ್ಕು ಅಪ್ಪ-ಮಗ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ.
ರಾಮ ಗೊರನಾಳ (45), ಮಗ ಲಕ್ಷ್ಮಣ (22) ಸ್ಥಳದಲ್ಲೆ ಅಸುನೀಗಿದ್ದಾರೆ. ಲಾರಿ ಕೆಳಗೆ ಮೃತದೇಹಗಳು ಸಿಕ್ಕಿಕೊಂಡ ಪರಿಣಾಮ ಶವ ಹೊರ ತೆಗೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮೃತ ತಂದೆ-ಮಗ ಕನ್ನೊಳ್ಳಿಯಿಂದ ದೇವರಹಿಪ್ಪರಗಿ ಕಡೆಗೆ ಹೊರಟಾಗ ಅವಘಡ ಸಂಭವಿಸಿದೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆಗಿದೆ.